ಅಹಮದಾಬಾದ್: ನಗರದಿಂದ ಲಂಡನ್ಗೆ ಹಾರಿದ ಏರ್ ಇಂಡಿಯಾ ವಿಮಾನ AI-171, ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ಮೇಘಾನಿನಗರದ ವಸತಿ ಪ್ರದೇಶದಲ್ಲಿ ಅಪಘಾತಕ್ಕೀಡಾಯಿತು. ಈ ಭೀಕರ ವಿಮಾನ ಅಪಘಾತವು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಇಂಡಿಯಾ
ಬೋಯಿಂಗ್ 787-8 ಡ್ರೀಮ್ಲೈನರ್ನಲ್ಲಿ 230 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಇದ್ದರು. ಪತನದ ವೇಳೆ ಬೆಂಕಿಯ ಉಂಡೆಯಾಗಿ ಮಾರ್ಪಟ್ಟ ವಿಮಾನದ ಅವಶೇಷಗಳಲ್ಲಿ ಯಾರೂ ಬದುಕುಳಿಯುವ ಭರವಸೆ ಇರಲಿಲ್ಲ. ಆದರೆ 40 ವರ್ಷದ ರಮೇಶ್ ವಿಶ್ವಾಸ್ ಕುಮಾರ್ ಸಾವನ್ನು ಸೋಲಿಸುವ ಮೂಲಕ ಪವಾಡವನ್ನು ಸೃಷ್ಟಿಸಿದರು. ವಿನಾಶ ಮತ್ತು ಶೋಕದ ನಡುವೆ ಬದುಕುಳಿದ ಏಕೈಕ ವ್ಯಕ್ತಿಯಾಗಿದ್ದಾರೆ. ಇಂಡಿಯಾ
ಸೀಟ್ ಸಂಖ್ಯೆ 11A ನಲ್ಲಿ ಕುಳಿತಿದ್ದ ರಮೇಶ್ ಬ್ರಿಟಿಷ್ ಪ್ರಜೆಯಾಗಿದ್ದು, ಕಳೆದ 20 ವರ್ಷಗಳಿಂದ ಲಂಡನ್ನಲ್ಲಿ ವಾಸಿಸುತ್ತಿದ್ದಾರೆ. ಅವರು ತಮ್ಮ ಸಹೋದರ ಅಜಯ್ ಕುಮಾರ್ ರಮೇಶ್ ಅವರೊಂದಿಗೆ ತಮ್ಮ ಕುಟುಂಬವನ್ನು ಭೇಟಿ ಮಾಡಲು ಭಾರತಕ್ಕೆ ಬಂದಿದ್ದರು. ಇಂಡಿಯಾ
ಇದನ್ನೂ ಓದಿ: ಗೋವಾ| 3 ಹುಡುಗಿಯರ ಮೇಲೆ ಅತ್ಯಾಚಾರ; ಆರೋಪಿಗಳ ಬಂಧನ
ಅಪಘಾತದ ನಂತರ, ರಮೇಶ್ ಮಾಧ್ಯಮಗಳಿಗೆ, “ಟೇಕ್ ಆಫ್ ಆದ 30 ಸೆಕೆಂಡುಗಳ ನಂತರ, ದೊಡ್ಡ ಸ್ಫೋಟ ಸಂಭವಿಸಿತು. ವಿಮಾನ ಗಾಳಿಯಲ್ಲಿ ಒದ್ದಾಡಿತು ಮತ್ತು ನಂತರ ನೆಲಕ್ಕೆ ಅಪ್ಪಳಿಸಿತು. ನಾನು ಕಣ್ಣು ತೆರೆದಾಗ, ಸುತ್ತಲೂ ಶವಗಳು ಮತ್ತು ಅವಶೇಷಗಳು ಇದ್ದವು. ನಾನು ಭಯಭೀತನಾಗಿದ್ದೆ, ಆದರೆ ಹೇಗೋ ಸೀಟಿನಿಂದ ಎದ್ದು ಉರಿಯುತ್ತಿರುವ ಅವಶೇಷಗಳಿಂದ ಹೊರಗೆ ಓಡಿಹೋದೆ. ಈ ವೇಳೆ ಮುಖ ಮತ್ತು ಕಾಲುಗಳ ಮೇಲೆ ಗಂಭೀರ ಗಾಯಗಳಾಗಿದ್ದರೂ, ಅವರು ಕುಂಟುತ್ತಾ ಸ್ಥಳದಿಂದ ಹೊರಬಂದರು.
ರಮೇಶ್ ಅವರ ರಕ್ಷಣೆ ದೈವಿಕ ಪವಾಡಕ್ಕಿಂತ ಕಡಿಮೆಯಿಲ್ಲ. ಪೊಲೀಸ್ ಆಯುಕ್ತರ ಪ್ರಕಾರ, ರಮೇಶ್ ಮತ್ತು ಇನ್ನೊಬ್ಬ ಪ್ರಯಾಣಿಕ ಮಾತ್ರ ಅಪಘಾತದಿಂದ ಬದುಕುಳಿದಿದ್ದಾರೆ. ಇನ್ನೊಬ್ಬ ಪ್ರಯಾಣಿಕ ಆಸ್ಪತ್ರೆಯಲ್ಲಿದ್ದಾರೆ. ಆದರೆ ರಮೇಶ್ ಅವಶೇಷಗಳಿಂದ ಹೊರಬರುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಜನರು ಇದನ್ನು “ಮುಖದ್ದರ್ ಕಾ ಸಿಕಂದರ್” ಎಂದು ಕರೆದಿದ್ದಾರೆ. “ನಾನು ಹೇಗೆ ಬದುಕುಳಿದೆ ಎಂದು ನನಗೆ ತಿಳಿದಿಲ್ಲ, ಬಹುಶಃ ಅದು ದೇವರ ಇಚ್ಛೆಯಾಗಿರಬಹುದು. ನನ್ನ ಸಹೋದರ ಸಹ ವಿಮಾನದಲ್ಲಿದ್ದು ಆತನನ್ನು ಹುಡುಕಲು ಬಯಸುತ್ತೇನೆ, ಅವನು ನನ್ನು ಜೊತೆ ಇದ್ದನು ಎಂದು ರಮೇಶ್ ಹೇಳಿದರು.
ಈ ಅಪಘಾತವು ಭಾರತದಲ್ಲಿ ನಡೆದ ಅತ್ಯಂತ ಮಾರಕ ವಿಮಾನ ಅಪಘಾತಗಳಲ್ಲಿ ಒಂದಾಗಿದೆ. ಇದರಲ್ಲಿ 242 ಪ್ರಯಾಣಿಕರ ಪೈಕಿ 241 ಮಂದಿ ಸಾವನ್ನಪ್ಪಿದ್ದಾರೆ. ಆರಂಭಿಕ ತನಿಖೆಗಳು ಎಂಜಿನ್ ವೈಫಲ್ಯವೇ ಕಾರಣ ಎಂದು ಉಲ್ಲೇಖಿಸಿವೆ. ರಮೇಶ್ ಅವರ ಕಥೆ ಜನರನ್ನು ಬೆಚ್ಚಿಬೀಳಿಸಿದೆ. ಸ್ಥಳೀಯ ನಿವಾಸಿಯೊಬ್ಬರು, “ವಿಮಾನ ಬೆಂಕಿಯ ಉಂಡೆಯಾಗಿ ಮಾರ್ಪಟ್ಟಿತ್ತು, ಯಾರಾದರೂ ಹೇಗೆ ಬದುಕುಳಿಯಲು ಸಾಧ್ಯ? ಇದು ದೇವರ ದಯೆ” ಎಂದು ಹೇಳಿದರು. ರಮೇಶ್ ಅವರ ರಕ್ಷಣೆಯು ವಿಮಾನ ಅಪಘಾತಗಳಲ್ಲಿ ಜನರು ಅದ್ಭುತವಾಗಿ ಬದುಕುಳಿದ ಅಪರೂಪದ ಪ್ರಕರಣಗಳನ್ನು ನೆನಪಿಸುತ್ತದೆ. 2009ರಲ್ಲಿ ಯೆಮೆನಿಯಾ ಫ್ಲೈಟ್ 626ರ ಬಹಿಯಾ ಬಕಾರಿಯಂತೆ, ಹಿಂದೂ ಮಹಾಸಾಗರಕ್ಕೆ ಅಪ್ಪಳಿಸಿದ ನಂತರ ಬದುಕುಳಿದ ಏಕೈಕ ವ್ಯಕ್ತಿ. ರಮೇಶ್ ಅವರ ಕಥೆ ಅವರ ಧೈರ್ಯಕ್ಕೆ ಸಾಕ್ಷಿಯಾಗುವುದಲ್ಲದೆ, ವಿಪತ್ತಿನಲ್ಲಿಯೂ ಯಾವಾಗಲೂ ಭರವಸೆಯ ಕಿರಣವಿದೆ ಎಂದು ಕಲಿಸುತ್ತದೆ. ಪ್ರಸ್ತುತ, ರಮೇಶ್ ಅಹಮದಾಬಾದ್ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ದೇಶವು ಅವರ ಸುರಕ್ಷತೆಗಾಗಿ ಪ್ರಾರ್ಥಿಸುತ್ತಿದೆ.
ಇದನ್ನೂ ನೋಡಿ: ಜನ ಸಂಖ್ಯೆಗೆ ಸಂಬಂಧಿಸಿದಂತೆ ಮಾತ್ರ ಮರು ಸಮೀಕ್ಷೆ : ಸಿದ್ದರಾಮಯ್ಯ | Janashakthi Media