ಕಾಲೇಜಿನಲ್ಲಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪ್ರಾಧ್ಯಾಪಕಿ

ಬೆಂಗಳೂರು: ಪ್ರಾಧ್ಯಾಪಕಿಯೊಬ್ಬರು ಕಾಲೇಜಿನಲ್ಲೇ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ ನಗರದ ಎಸ್​ಎಸ್​ಎಂಆರ್​ವಿ ಪದವಿ ಕಾಲೇಜಿನಲ್ಲಿ ಘಟನೆ ನಡೆದಿದೆ.

ಶಬಾನಾ ಎಂಬುವವರು ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪ್ರಾಧ್ಯಾಪಕಿ. ಪ್ರಾಂಶುಪಾಲರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನ ಆರೋಪ ಮಾಡಲಾಗಿದೆ. ಅಸ್ವಸ್ಥಗೊಂಡ ಪ್ರಾಧ್ಯಾಪಕಿ ಶಬಾನಾ ಖಾಸಗಿ ಆಸ್ಪತ್ರೆಗೆ ದಾಖಲಾಗಿದೆ.

ಇದನ್ನೂ ಓದಿ: ಪ್ರೊ. ಜಿ.ಎನ್. ಸಾಯಿಬಾಬಾ ಸಾವು; ಪ್ರಜಾಪ್ರಭುತ್ವದ ಮೇಲೊಂದು ಕಪ್ಪು ಚುಕ್ಕೆ

ಸ್ಥಳಕ್ಕೆ ತಿಲಕ್ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಬಗ್ಗೆ ಪ್ರಾಧ್ಯಾಪಕಿ ಶಬಾನಾ ಪ್ರತಿಕ್ರಿಯಿಸಿದ್ದು, ನಾನು ಬ್ಲ್ಯಾಕ್​ ಮ್ಯಾಜಿಕ್ ಮಾಡುತ್ತೇನೆ ಅಂತಾ ಯಾರು ಮಾತಾಡಲ್ಲ.

ಕಾಲೇಜಿನಲ್ಲಿ ಅವಿನಾಶ್, ಶಾಂತಿ ಕೃಷ್ಣ, ಸ್ಮಿತಾ, ನರೇಶ್ ಕಳೆದ ಮೂರು ತಿಂಗಳಿನಿಂದ ತುಂಬಾ ಕಿರುಕುಳ ಕೊಡುತ್ತಿದ್ದಾರೆ. ಕೆಲಸಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯ ಮಾಡುತ್ತಾರೆ. ಇದರಿಂದ ನನ್ನ ಪರ್ಸನಲ್ ಲೈಫ್​ಗೂ ಸಮಸ್ಯೆ ಆಗುತ್ತಿದೆ. ಅದಕ್ಕೆ ತುಂಬಾ ಬೇಜಾರ್​ ಆಗಿ ಸಾಯುವ ನಿರ್ಧಾರಕ್ಕೆ ಬಂದೆ ಎಂದು ಹೇಳಿದ್ದಾರೆ.

ಇದನ್ನೂ ನೋಡಿ: ಪಿಚ್ಚರ್ ಪಯಣ – 151| ಚಿತ್ರ – ಹದಿನೇಳೆಂಟು – ಸಮಕಾಲೀ‌ನ ಸಮಸ್ಯೆಗಳ ಅನಾವರಣವಿಶ್ಲೇಷಣೆ – ರೋಹಿತ್‌ ಅಗಸರಹಳ್ಳಿ, ಹಾಸನ

Donate Janashakthi Media

Leave a Reply

Your email address will not be published. Required fields are marked *