ಮೈಸೂರು: ಇತ್ತೀಚೆಗೆ ನಿಧನರಾದ ಚಳವಳಿಗಳ ಸಂಗಾತಿ ಮಂಜುಳ ಮೇಡಂ ರ ನೆನಪಿನ ಕುರಿತು ಏಪ್ರಿಲ್ 25ರ ಶುಕ್ರವಾರ ರಂದು ಬೆಳಿಗ್ಗೆ 10.30 ಕ್ಕೆ ನಡೆಯಲಿದೆ ಎಂದು ಪತಿ, ನಿವೃತ್ತ ಅಧ್ಯಾಪಕ ರಾಜಪ್ಪ ದಳವಾಯಿ ತಿಳಿಸಿದ್ದಾರೆ.
ಈ ಕಾರ್ಯಕ್ರಮವು ಮೈಸೂರಿನ ಕೊಡಗು ಸಹಕಾರ ಸಂಘ , ಹಾಸ್ಪಿಟಲ್ ರಸ್ತೆ, ಜಯಲಕ್ಷ್ಮೀಪುರಂನಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಹಾಡು ಮತ್ತು ಮಂಜುಳಾ ಅವರ ಒಡನಾಟದ ಕುರಿತು ಹಲವರು ವಿಷಯಗಳನ್ನು ಹಂಚಿಕೊಳ್ಳಲಿದ್ದಾರೆ.ಚಳವಳಿ
ಕಾರ್ಯಕ್ರಮದಲ್ಲಿ ಖ್ಯಾತ ಹಾಡುಗಾರರಾದ ಲಕ್ಷ್ಮಣದಾಸ್ , ಅಪ್ಪಗೆರೆ ತಿಮ್ಮರಾಜು , ಜನ್ನಿ , ಪಿಚ್ಚಳ್ಳಿ ಶ್ರೀನಿವಾಸ್ , ಜೋಗಿಲ ಸಿದ್ದರಾಜು , ಪದ ದೇವರಾಜ್ , ರಾಮಚಂದ್ರ ಹಡಪದ , ಮಂಜುಳ ಮಂಡ್ಯ , ದೇವಾನಂದ ವರಪ್ರಸಾದ , ಉಮಾ ವೈ.ಜಿ , ರಾಜಪ್ಪ ಕೋಲಾರ , ಹುಲಗವಾಡಿ ರಾಮಯ್ಯ , ನರಸಿಂಹಮೂರ್ತಿ ಚಾಮರಾಜನಗರ , ತುಳಸಮ್ಮ ಹಾಡು ಹಾಡಲಿದ್ದಾರೆ.
ಇದನ್ನೂ ಓದಿ: ಪಹಲ್ಗಾಮ್ ಭಯೊತ್ಪಾದಕರ ದಾಳಿಗೆ 28 ಜನರ ಸಾವು: ಡಿವೈಎಫ್ಐ ಖಂಡನೆ
ಬರಗೂರು ರಾಮಚಂದ್ರಪ್ಪ, ಸಬಿಹಾ ಭೂಮಿಗೌಡ, ಬಂಜಗೆರೆ ಜಯಪ್ರಕಾಶ, ಸುನಂದಮ್ಮ, ಸಿ. ಬಸವಲಿಂಗಯ್ಯ, ಎಚ್.ಎಲ್.ಪುಷ್ಪ, ನೇತ್ರ ಕೋಲಾರ, ಎಚ್.ಆರ್.ಸ್ವಾಮಿ, ಮಲ್ಲಿಕಾರ್ಜುನಸ್ವಾಮಿ, ಎಚ್.ಎಸ್.ಅನುಪಮ್, ನಾ.ದಿವಾಕರ್, ರತಿರಾವ್, ಸುಶೀಲ ಬಸು, ಕಾಳಚನ್ನೇಗೌಡ, ವೆಂ.ವನಜ, ಮಹದೇವಯ್ಯ ಶಿವಮ್ಮ ಎಸ್. ಆರ್. ರಮೇಶ್, ಸುಮತಿ ಕೆ.ಆರ್, ರಾಜೇ ಅರಸ್, ದು.ಸರಸ್ವತಿ, ಪರಶು ಒಡನಾಡಿ ಮಂಜುಳಾ ಅವರ ಕುರಿತು ಮಾತನಾಡಲಿದ್ದಾರೆ.
ಇದನ್ನೂ ನೋಡಿ: ಎನ್ಕೌಂಟರ್ ರಾಜ್ಯ | ಉದಯ ಗಾಂವಕಾರ Janashakthi Media