ಎರಡು ಕೋಮುಗಳ ನಡುವೆ ನಡೆದ ಘರ್ಷಣೆ; ಓರ್ವ ಗುಂಡಿನ ದಾಳಿಗೆ ಬಲಿ

ಉತ್ತರ ಪ್ರದೇಶ: ಭಾನುವಾರ ಅಕ್ಟೋಬರ್ 13 ರಾತ್ರಿ ದುರ್ಗಾ ವಿಸರ್ಜನೆ ಮರವಣಿಗೆ ವೇಳೆ ಎರಡು ಕೋಮುಗಳ ನಡುವೆ ನಡೆದ ಘರ್ಷಣೆಯಲ್ಲಿ ಓರ್ವ ಗುಂಡಿನ ದಾಳಿಗೆ ಬಲಿಯಾದ ಘಟನೆ ಉತ್ತರ ಪ್ರದೇಶದ ಬಹ್ಮ ಚನಲ್ಲಿ ನಡೆದಿದೆ. ಮೃತ ಯುವಕನ್ನು ರಾಹುವಾ ಮನ್ಸೂರ್ ಗ್ರಾಮದ ರಾಮ್ ಗೋಪಾಲ್ ಮಿಶ್ರಾ (22) ಎನ್ನಲಾಗಿದೆ. ಕೋಮು

ಏನಿದು ಘಟನೆ

ಹಾರ್ಡಿ ಪೊಲೀಸ್ ಠಾಣೆ ವ್ಯಾಪ್ತಿಯ ಮಹಿ ಮಹಾರಾಜ್‌ಗಲಡ್‌ನಲ್ಲಿ ದುರ್ಗಾ ವಿಗ್ರಹ ವಿಸರ್ಜನೆಯ ಮರವಣಿಗೆ ಸಂದರ್ಭದಲ್ಲಿ ಡಿಜೆ ವಿಚಾರದಲ್ಲಿ ಎರಡು ಗುಂಪಿನ ನಡುವೆ ಮಾತಿಗೆ ಮಾತು ಬೆಳಗಿದ ಬಳಿಕ ಇದು ಹಿಂಸಾತ್ಮಕ ರೂಪಕ ತಿರುಗಿದ ಈ ವೇಳೆ ಒಂದು ಕೋಮಿನ ವ್ಯಕ್ತಿ ರಾಮ್ ಗೋಪಾಲ್ ಮೇಲೆ ಗುಂಡು ಹಾರಿಸಿದ್ದಾನೆ

ಗಂಭೀರ ಗಾಯಗೊಂಡ ಯುವಕ ಚಿಕಿತ್ಸೆ ಫಲಕಾರಿಯಾಗದ ಕೊನೆಯುಸಿರೆಳೆದಿದ್ದು ಇದರಿಂದ ರೊಚ್ಚಿಗೆದ್ದ ಇನ್ನೊಂದು ಕೋಮಿನ ಜನ ಮಹಾರಾಜ್‌ಗಂಜ್ ಮಾರುಕಟ್ಟೆಯಲ್ಲಿದ್ದ ಕೆಲವು ವಾಹನಗಳನ್ನು ಧ್ವಂಸಗೊಳಿಸಿದರು ಮತ್ತು ಬೆಂಕಿ ಹಚ್ಚಿದರು.

ಇದನ್ನೂ ಓದಿ: ರಾಜಭವನ – ಕಾಂಗ್ರೆಸ್ ಸರ್ಕಾರದ ನಡುವೆ ಘರ್ಷಣೆ ಸಾಧ್ಯತೆ

ವಿಷಯ ತಿಳಿಯುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು ಇಡೀ ಪ್ರದೇಶವನ್ನು ಸುತ್ತುವರೆದಿದ್ದಾರೆ ಮತ್ತು ಮಾರುಕಟ್ಟೆ ಪ್ರದೇಶವನ್ನು ಕಂಟೋನ್ಮಂಟ್ ಪ್ರದೇಶವಾಗಿ ಪರಿವರ್ತಿಸಿದ್ದಾರೆ. ಘಟನಾ ಸ್ಥಳಕ್ಕೆ ಡಿಐಜಿ ದೇವಿಪಟ್ಟಣ ಅಮರೇಂದ್ರ ಪ್ರಸಾದ್ ಸಿಂಗ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆದೇಶ

ಈ ಹಿಂಸಾಚಾರದ ನಂತರ, ಪೊಲೀಸ್ ಠಾಣೆಯ ಪ್ರಭಾರಿ ಹಾರ್ದಿ ಮತ್ತು ಹೊರಠಾಣೆ ಪ್ರಭಾರಿ ಮಹಿಯನ್ನು ಅಮಾನತುಗೊಳಿಸಲಾಗಿದೆ, ಅದೇ ಸಮಯದಲ್ಲಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬಚ್‌ನ ಮಾಯಲ್ಲಿ ವಾತಾವರಣವನ್ನು ಹಾಳು ಮಾಡಲು ಮತ್ತು ಹಿಂಸಾಚಾರವನ್ನು ಪ್ರಚೋದಿಸಲು ಪ್ರಯತ್ನಿಸುತ್ತಿರುವವರ ವಿರುದ್ಧ ಕೌಣ ಕ್ರಮ ಕೈಗೊಳ್ಳಲು ಆದೇಶಿಸಿದ್ದಾರೆ.

30 ಜನರ ಬಂಧನ

ಘಟನೆಗೆ ಸಂಬಂಧಿಸಿ ಭಚ್ ಪೊಲೀಸರು ಕನಿಷ್ಯ 30 ಜನರನ್ನು ಬಂಧಿಸಿರುವುದಾಗಿ ಹೇಳಲಾಗಿದೆ ಆಲದೆ ರಾಮ್ ಗೋಪಾಲ್ ಮಿಶ್ರಾ ಮೇಲೆ ಗುಂಡು ಹಾರಿಸಿದ ಆರೋಪದ ಮೇಲೆ ಸಲ್ಮಾನ್ ಎಂಬ ವ್ಯಕ್ತಿಯನ್ನು ಬಂಧಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ನೋಡಿ: ಕೇಂದ್ರ ಸರ್ಕಾರ ಮಕ್ಕಳ ಹಕ್ಕುಗಳನ್ನು ಕಸಿಯುತ್ತಿದೆ – ಯಮುನಾ ಗಾಂವ್ಕರ್‌ Janashakthi Media

Donate Janashakthi Media

Leave a Reply

Your email address will not be published. Required fields are marked *