ಮುಂಬೈ: ಮುಂಬೈ-ಗೋವಾ ರಾಷ್ಟ್ರೀಯ ಹೆದ್ದಾರಿ ಯೋಜನೆಯ ಬಗ್ಗೆ ಹೆಚ್ಚುತ್ತಿರುವ ಸಾರ್ವಜನಿಕ ಆಕ್ರೋಶದ ಮಧ್ಯೆ, ಮಹಾರಾಷ್ಟ್ರದ ರೈಗಡ ಜಿಲ್ಲೆಯ 28 ವರ್ಷದ ಚೈತನ್ಯ ಪಾಟೀಲ್ ಎಂಬ ಯುವಕ ರಸ್ತೆಯ ಸುರಕ್ಷತಾ ಲೋಪಗಳು ಹಾಗೂ ಪ್ರಯಾಣಿಕರು ಎದುರಿಸುತ್ತಿರುವ ಸವಾಲುಗಳನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡುವ ಸಲುವಾಗಿ ಅವರು 490 ಕಿ.ಮೀ. ದೂರ ನಡೆಯುವ ಮೂಲಕ ಪಾದಯಾತ್ರೆ ಮಾಡಿದ್ದಾರೆ.
ತಮ್ಮ ವರದಿಯನ್ನು ಸಂಸದರ ಮೂಲಕ ಅವರು ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಕಳುಹಿಸಿದ್ದಾರೆ.
ಚೈತನ್ಯ ಪಾಟೀಲ್ ತಮ್ಮ ಅಭಿಯಾನಕ್ಕೆ ರಸ್ತಾ ಸತ್ಯಾಗ್ರಹ ಎಂದು ಹೆಸರಿಟ್ಟಿದ್ದಾರೆ. ರಾಷ್ಟ್ರೀಯ ಹೆದ್ದಾರಿ-66ರಲ್ಲಿ 29 ದಿನಗಳ ಕಾಲ ನಡೆದುಕೊಂಡು ಹೋಗಿದ್ದಾರೆ. ಗುಂಡಿಗಳು, ಅಪಘಾತ-ಪೀಡಿತ ಪ್ರದೇಶಗಳು, ಕಾಣೆಯಾದ ರಸ್ತೆ ಫಲಕಗಳು, ಅಪೂರ್ಣ ಸೇತುವೆಗಳು ಮತ್ತು ಪ್ರಯಾಣಿಕರ ಜೀವಕ್ಕೆ ಅಪಾಯವನ್ನುಂಟುಮಾಡುವ ಇತರ ಅಪಾಯಗಳನ್ನು ಈ ವೇಳೆ ಅವರು ದಾಖಲಿಸಿದರು.
ಇದನ್ನೂ ಓದಿ: ಚಳಿಗಾಲದ ಅಧಿವೇಶನ: ಶಾಸಕ ಶಾಮನೂರು ಶಿವಶಂಕರಪ್ಪ ನಿಧನಕ್ಕೆ ಸಂತಾಪ ಸಲ್ಲಿಕೆ
ಮುಂಬೈ-ಗೋವಾ ರಾಷ್ಟ್ರೀಯ ಹೆದ್ದಾರಿಯನ್ನು ಸುರಕ್ಷಿತ, ಅಪಘಾತ ಮುಕ್ತ ಮತ್ತು ಉತ್ತಮ ಗುಣಮಟ್ಟ ರಸ್ತೆಯನ್ನಾಗಿ ಮಾಡುವುದು ನನ್ನ ಏಕೈಕ ಗುರಿ. ಇದರಿಂದ ಜನರು ಭಯವಿಲ್ಲದೆ ಪ್ರಯಾಣಿಸಬಹುದು. ಕೆಟ್ಟ ರಸ್ತೆಗಳಿಂದಾಗಿ ಜನರ ಜೀವಕ್ಕೆ ಅಪಾಯವಾಗಬಾರದು ಎಂದು ಪಾಟೀಲ್ ಹೇಳಿದರು.
ಅವರು ಆಗಸ್ಟ್ 9ರಂದು ರಾಯಗಢದ ಪಲಾಸ್ಪೆಯಿಂದ ಪಾದಯಾತ್ರೆಯನ್ನು ಪ್ರಾರಂಭಿಸಿದರು. ಅಕ್ಟೋಬರ್ 20ರಂದು ಅದನ್ನು ಮುಕ್ತಾಯಗೊಳಿಸಿದರು. ಭಾರಿ ಮಳೆ ಮತ್ತು ಆರೋಗ್ಯ ಸಮಸ್ಯೆಗಳು ಕಾಡಿದರೂ ಅವರು ಧೃತಿಗೆಡಲಿಲ್ಲ. ಪಾದಯಾತ್ರೆಯನ್ನು ಪೂರ್ಣಗೊಳಿಸಿ, ಎಲ್ಲೆಲ್ಲಿ ಏನು ಸಮಸ್ಯೆಯಿದೆ ಎಂಬುದನ್ನು ಅವರು ದಾಖಲಿಸಿಕೊಂಡಿದ್ದಾರೆ.
ಚೈತನ್ಯ ಪಾಟೀಲ್ ಯಾರು?
ರಾಯಗಢ ಜಿಲ್ಲೆಯ ಕಾಸು ಗ್ರಾಮದ 28 ವರ್ಷದ ಚೈತನ್ಯ ಪಾಟೀಲ್ ಎಂಜಿನಿಯರಿಂಗ್ ಪದವೀಧರ. 2019ರಿಂದ ಮುಂಬೈ-ಗೋವಾ ಹೆದ್ದಾರಿ ಯೋಜನೆಯ ಬಗ್ಗೆ ಕಳವಳ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಹಲವು ವರ್ಷಗಳಿಂದ ಅವರು ಫೋನ್ ಕರೆಗಳು, ಇಮೇಲ್ಗಳು ಮತ್ತು ಸಾಮಾಜಿಕ ಮಾಧ್ಯಮ ಅಭಿಯಾನಗಳ ಮೂಲಕ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ರಸ್ತೆ ಗುಂಡಿಗಳು, ಅಪೂರ್ಣ ಕಾಮಗಾರಿ ಮತ್ತು ಅಪಘಾತದ ಅಪಾಯಗಳನ್ನು ಎತ್ತಿ ತೋರಿಸಿದ್ದಾರೆ. ನಾನು ಗುರುತಿಸಿದ ಗುಂಡಿಗಳು 24ರಿಂದ 48 ಗಂಟೆಗಳ ಒಳಗೆ ಮುಚ್ಚಲ್ಪಟ್ಟ ಹಲವು ನಿದರ್ಶನಗಳಿವೆ ಎಂದು ಅವರು ಹೇಳಿದ್ದಾರೆ.
ಗಡ್ಕರಿಗೆ 59 ಅಂಶಗಳ ಅಪಾಯದ ವರದಿ
ಪಾದಯಾತ್ರೆಯ ಸಮಯದಲ್ಲಿ, ಪಾಟೀಲ್ 59 ನಿರ್ಣಾಯಕ ಅಂಶಗಳನ್ನು ಗುರುತಿಸಿದರು. ಡೇಟಾ, ಫೋಟೊ ಮತ್ತು ಜಿಪಿಎಸ್ ಟ್ಯಾಗ್ ಮಾಡಿದ ಸಾಕ್ಷ್ಯಗಳನ್ನು ಸಂಗ್ರಹಿಸಿ ವರದಿಯಲ್ಲಿ ಉಲ್ಲೇಖಿಸಿದರು. ಅವರು ಕ್ಯೂಆರ್ ಕೋಡ್ಗಳು ಸೇರಿದಂತೆ ಡಿಜಿಟಲ್ ಪರಿಕರಗಳನ್ನು ಬಳಸಿಕೊಂಡು ವಿವರವಾದ ವರದಿಯನ್ನು ಸಿದ್ಧಪಡಿಸಿ ಶಿವಸೇನೆ (ಯುಬಿಟಿ) ಸಂಸದ ಅರವಿಂದ್ ಸಾವಂತ್ ಮೂಲಕ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಸಲ್ಲಿಸಿದರು.
ಸರ್ವೀಸ್ ರೋಡ್ ಸೇರಿದಂತೆ ಸುಮಾರು 75ರಿಂದ 85 ಕಿ.ಮೀ. ಕಾಮಗಾರಿ ಬಾಕಿ ಉಳಿದಿದೆ ಎಂದು ಅವರು ಹೇಳಿದರು. ಪ್ರಯಾಣದ ಸಮಯದಲ್ಲಿ ಪಾಟೀಲ್, ಹೆದ್ದಾರಿಯಲ್ಲಿ ಬಿದ್ದಿದ್ದ ಕಬ್ಬಿಣದ ತುಂಡುಗಳು, ಒಡೆದ ಗಾಜಿನ ಬಾಟಲಿಗಳು ಮತ್ತು ಅಪಘಾತಗಳು ಅಥವಾ ಟೈರ್ ಪಂಕ್ಚರ್ಗಳಿಗೆ ಕಾರಣವಾಗಿದ್ದ ಹೋರ್ಡಿಂಗ್ಗಳು ಸೇರಿದಂತೆ ಭಗ್ನಾವಶೇಷಗಳನ್ನು ಸಂಗ್ರಹಿಸಿದರು.
ಇದನ್ನೂ ನೋಡಿ: ಡ್ರಗ್ಸ್ ಮಾಫಿಯಾ :ಯುವಜನ ಟಾರ್ಗೆಟ್ ಯಾಕೆ? ಪೊಲೀಸರ ಬಲೆಗೆ ಬೀಳದ ಪೆಡ್ಲರ್ಗಳು Janashakthi Media
