ವಾಯುವ್ಯ ಶಿಕ್ಷಕರ ಕ್ಷೇತ್ರ: ಕಾಂಗ್ರೆಸ್ ನ ಪ್ರಕಾಶ ಹುಕ್ಕೇರಿ ಮುನ್ನಡೆ

  • ಮೊದಲ ಸುತ್ತಿನಲ್ಲಿ ಕಾಂಗ್ರೇಸ್ ಗೆ ಮುನ್ನಡೆ
  • ಫಲಿತಾಂಶಕ್ಕೂ ಮನ್ನವೆ ಹುಕ್ಕೇರಿ ಬೆಂಬಲಿಗರಿಂದ ಸಂಭ್ರಮಾಚರಣೆ 

ಬೆಳಗಾವಿ: ವಾಯವ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಅವರು ಮೊದಲ ಸುತ್ತಿನಲ್ಲಿ 1702 ಮತಗಳನ್ನ ಪಡೆದುಕೊಂಡು ಮುನ್ನಡೆ ಸಾಧಿಸಿದ್ದಾರೆ.

ಮೊದಲ ಸುತ್ತಿನ ಎಣಿಕೆಯಲ್ಲಿ ಪ್ರಕಾಶ ಹುಕ್ಕೇರಿ ಅವರಿಗೆ 4,826 ಮತಗಳು ಬಂದಿದ್ದು, ಸಮೀಪದ ಸ್ಪರ್ಧಿ ಬಿಜೆಪಿ ಅರುಣ ಶಹಾಪುರ ಅವರಿಗೆ 3,124 ಮತ ಬಂದಿವೆ, ಆದ್ದರಿಂದ ಬೆಳ್ಳಗ್ಗೆಯಿಂದ ಎಣಿಕೆ ಟೇಬಲ್ ಮುಂದೆ ಕೂತಿದ್ದ ಬಿಜೆಪಿ  ಅಭ್ಯರ್ಥಿ ಅರುಣ ಶಹಾಪುರ ಎಣಿಕೆ ಕೆಂದ್ರದಿಂದ ಹೊರನಡೆದಿದ್ದಾರೆ. ಈ ಸಮಯದಲ್ಲಿ ಕೇಂದ್ರದ ಹೊರಗೆ ಜಮಾಯಿಸಿದ್ದ ಬಿಜೆಪಿ ಕಾರ್ಯಕರ್ತರು ಕೂಡ ಅರುಣ್‌ ರವರನ್ನೆ ಹಿಂಬಾಲಿಸಿದ್ದಾರೆ.   ಇನ್ನೊಂದೆಡೆ,  ಫಲಿತಾಂಶಕ್ಕೂ ಮುನ್ನ ಪ್ರಕಾಶ ಹುಕ್ಕೇರಿ ಅವರ ಕೆಲವು ಬೆಂಬಲಿಗರು  ಮನ್ನಡೆ ಸಾಧಿಸಿರುವುದಕ್ಕೆ ಸಂಭ್ರಮಾಚರಣೆ ಮಾಡಿದರು.

Donate Janashakthi Media

Leave a Reply

Your email address will not be published. Required fields are marked *