ಎಚ್‌.ಡಿ.ಕೆ ಅವರಿಗೆ ಕೇಂದ್ರ ಸರ್ಕಾರದಲ್ಲಿ ಕೆಲಸ ಮಾಡುವುದು ಕಷ್ಟವಾಗುತ್ತಿದೆ: ಡಾ.ಎಂ.ಸಿ.ಸುಧಾಕರ್ ಟೀಕೆ

ಚಿಕ್ಕಬಳ್ಳಾಪುರ: ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ʼಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಕೇಂದ್ರ ಸರ್ಕಾರದಲ್ಲಿ ಕೆಲಸ ಮಾಡುವುದು ಕಷ್ಟವಾಗುತ್ತಿದೆ. ಆ ಕಾರಣ ರಾಜ್ಯ ಸರ್ಕಾರವನ್ನು ಬೀಳಿಸಲು ಪ್ರಯತ್ನಿಸುತ್ತಿದ್ದಾರೆʼ ಎಂದು  ಆರೋಪಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕುಮಾರಸ್ವಾಮಿ ಅವರಿಗೆ ಸುಲಲಿತವಾಗಿ ಇಂಗ್ಲಿಷ್ ಮಾತನಾಡಲು ಆಗದೇ ಇರಬಹುದು. ಹಿಂದಿ ಅರ್ಥವಾಗದೇ ಇರಬಹುದು.

ಇದನ್ನು ಓದಿ : ಕಬ್ಬಿಣ, ಸಿಮೆಂಟ್ ಮತ್ತು ಇಟ್ಟಿಗೆಗಳ ಬೆಲೆಗಳ ಏರಿಕೆ; ಟನ್‌ಗೆ ರೀಬಾರ್ ಬೆಲೆ 1,500 ರಿಂದ 2,000 ರೂ. ಹೆಚ್ಚಳ

ಭಾಷೆಯ ಸಮಸ್ಯೆ ಕಾರಣ ಕೇಂದ್ರದಲ್ಲಿ ಕೆಲಸ ಮಾಡಲು ಅವರಿಗೆ ಕಷ್ಟವಾಗಿದೆ. ಕೇಂದ್ರದಲ್ಲಿ ಸಮಾಧಾನವಿಲ್ಲದ ಕಾರಣ ಸರ್ಕಾರ ಬೀಳಿಸಲು ನಿರಂತರವಾಗಿ ಒದ್ದಾಡುತ್ತಿದ್ದಾರೆ ಎಂದರು.

ದಾಖಲೆಗಳು ಎಂದು ಪೇಪರ್ ತೋರಿಸುತ್ತಾರೆ. ಆ ಪೇಪರ್‌ನಲ್ಲಿ ಏನಿದೆಯೊ ಗೊತ್ತಿಲ್ಲ. ಕುಮಾರಸ್ವಾಮಿ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ಎಂದು ಟೀಕಿಸಿದರು.

ಇದನ್ನು ನೋಡಿ : ಮುಡಾ ಹಗರಣ : ಸಿದ್ದರಾಮಯ್ಯ ಸರ್ಕಾರವನ್ನು ಉರುಳಿಸುವ ಪಿತೂರಿ Janashakthi Media

Donate Janashakthi Media

Leave a Reply

Your email address will not be published. Required fields are marked *