ಮುಂಬೈ: ಜೂನ್ 9 ಸೋಮವಾರದಂದು ಜನದಟ್ಟಣೆಯ ಸಂದರ್ಭದಲ್ಲಿ ಮಿತಿಮೀರಿ ತುಂಬಿದ್ದ ರೈಲಿನಿಂದ ಆಯತಪ್ಪಿ ಕೆಳಗೆ ಬಿದ್ದು ಐವರು ಪ್ರಯಾಣಿಕರು ಸಾವನ್ನೊಪ್ಪಿದ್ದು, ಹಲವಾರು ಜನರು ಗಾಯಗೊಂಡಿರುವ ಘಟನೆ ದಿವಾ ಮತ್ತು ಕೋಪರ್ ರೈಲ್ವೆ ನಿಲ್ದಾಣಗಳ ನಡುವೆ ಸಂಭವಿಸಿರುವುದಾಗಿ ವರದಿ ತಿಳಿಸಿದೆ.
ಛತ್ರಿಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನತ್ತ ತೆರಳುತ್ತಿದ್ದ ಸ್ಥಳೀಯ ರೈಲಿನ ಬೋಗಿಗಳಿಂದ 10 ರಿಂದ 12 ಜನ ಪ್ರಯಾಣಿಕರು ಕೆಳಗೆ ಬಿದ್ದಿರುವುದಾಗಿ ವಿವರಿಸಿದೆ.
ಇದನ್ನೂ ಓದಿ: ಮಡಿಲ ಒರತೆಯ ಹುಡುಕಾಟದಲಿ
ಘಟನೆ ನಡೆದಾಗ ರೈಲು ಮಿತಿಮೀರಿದ ಜನರಿಂದ ತುಂಬಿದ್ದು, ಪ್ರಯಾಣಿಕರು ರೈಲಿನ ಬಾಗಿಲಿನಲ್ಲಿ ನೇತಾಡುತ್ತಿದ್ದರು. ಈ ಸಂದರ್ಭದಲ್ಲಿ ಆಯತಪ್ಪಿ ಕೆಳಬಿದ್ದ ಪರಿಣಾಮ ಐವರು ಕೊನೆಯುಸಿರೆಳೆದಿದ್ದು, ಕೆಲವರು ಗಾಯಗೊಂಡಿದ್ದರು. ಗಾಯಗೊಂಡವರನ್ನು ಸ್ಥಳೀಯ ಕಾಲ್ವಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.
ಸಾವನ್ನೊಪ್ಪಿದ್ದ ಪ್ರಯಾಣಿಕರು 30-35 ವರ್ಷದೊಳಗಿನವರಾಗಿದ್ದು, ಅವರ ಗುರುತನ್ನು ಇನ್ನಷ್ಟೇ ಪತ್ತೆ ಹಚ್ಚಬೇಕಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ನೋಡಿ: ಚರ್ಚೆ | ತ್ಯಾಗದ ಹಬ್ಬ ಬಕ್ರೀದ್- ಆಹಾರ ರಾಜಕಾರಣ – ಸೈಯದ್ ಶಫಿವುಲ್ಲಾ ಮತ್ತು ಕೆ ಎಸ್ ವಿಮಲಾ ಮಾತುಕತೆJanashakthi